
ನವದೆಹಲಿ, ಜ. 6 : ದೇಶವನ್ನೇ ಬೆಚ್ಚಿಬೀಳಿಸಿದ್ದ ಮಹಾಮಾರಿ ಎಚ್1 ಎನ್1 ಗೆ ಇದೀಗ ಬರೋಬ್ಬರಿ 1000 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಮುಂದುವರೆದಿದ್ದು, ಮಹಾರಾಷ್ಟ್ರದಲ್ಲಿ ಸುಮಾರು 278 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ.
ಮೆಕ್ಸಿಕೋ ದೇಶದಿಂದ ಶುರುವಾದ ಭೀಕರ ವೈರಸ್ ಕಡಿಮೆ ಅವಧಿಯಲ್ಲಿ ಜಗತ್ತಿನಾದ್ಯಂತ ಆವರಿಸಿಕೊಂಡಿತು. ಇದರ ಹಾವಳಿ ಭಾರತದಲ್ಲಿ ಕೂಡಾ ಮೀತಿ ಮೀರಿತ್ತು. ಪ್ರತಿ ರಾಜ್ಯಗಳು ಇದರ ಹೊಡೆತಕ್ಕೆ ತತ್ತರಿಸಿವೆ. ಈ ಮಾರಿ ಭಾರತಕ್ಕೆ ಕಾಲಿಟ್ಟ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ಮೊಟ್ಟಮೊದಲ ಬಾರಿಗೆ ಇದು ಕಾಣಿಸಿಕೊಂಡಿತು. ಹಂದಿಜ್ವರ ಬಾಲಕಿಯೊಬ್ಬಳು ಬಲಿಯಾಗಿದ್ದು, ದೇಶಾದ್ಯಂತ ಸುದ್ದಿ ಮಾಡಿತು. ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾರಿ ನಡೆಸಿದವು ಮತ್ತು ನಡೆಸುತ್ತಿವೆ ಕೂಡಾ.
ಹಂದಿಜ್ವರಕ್ಕೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಬಲಿಯಾಗಿದ್ದ 278, ಕರ್ನಾಟಕದಲ್ಲಿ 100 ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ, ಕರ್ನಾಟಕ, ರಾಜಸ್ತಾನ, ದೆಹಲಿ, ಆಂಧ್ರಪ್ರದೇಶ ಇದರ ಹಾವಳಿಗೆ ಅನೇಕರು ಬಲಿಯಾಗಿವೆ. ಸರಕಾರಗಳು ಕೂಡಾ ಹಂದಿಜ್ವರ ತಡೆಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
Source - Thats kannada
No comments:
Post a Comment