VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ಸೌದಿ ಅರೇಬಿಯಾ ವೀಸಾ ಕೇಂದ್ರ

ನವದೆಹಲಿ: ಬೆಂಗಳೂರಿನಲ್ಲಿ ಸೌದಿ ಅರೇಬಿಯಾದ ವೀಸಾ ಕೇಂದ್ರ ತೆರೆಯುವ ಕುರಿತು ಯತ್ನಿಸುವುದಾಗಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಬುಧವಾರ ಅಖಿಲ ಭಾರತ ಹಜ್ ಹಾಗೂ ಉಮ್ರಾ ನಿಯೋಗಕ್ಕೆ ಭರವಸೆ ನೀಡಿದ್ದಾರೆ.



ಪ್ರತಿವರ್ಷ 45,000ಕ್ಕೂ ಹೆಚ್ಚು ಹಜ್ ಯಾತ್ರಿಗಳು ಹಾಗೂ 10,000ಕ್ಕೂ ಹೆಚ್ಚು ಉಮ್ರಾ ಯಾತ್ರಿಗಳು ದಕ್ಷಿಣ ಭಾರತದಿಂದ ಸೌದಿ ಅರೇಬಿಯಾದಲ್ಲಿನ ಪವಿತ್ರ ಸ್ಥಳಗಳಿಗೆ ತೆರಳುತ್ತಾರೆ.

ಸದ್ಯ ಅವರು ವೀಸಾ ಪಡೆಯಲು ದೆಹಲಿ ಅಥವಾ ಮುಂಬೈಗೆ ತೆರಳಬೇಕಿದೆ. ಬೆಂಗಳೂರಿನಲ್ಲಿ ವೀಸಾ ಕಚೇರಿ ಆರಂಭಿಸಿದರೆ ಯಾತ್ರಿಗಳಿಗೆ ಅನುಕೂಲವಾಗಲಿದೆ ಎಂದು ನಿಯೋಗದ ಅಧ್ಯಕ್ಷ ಐ.ಎ. ಸಿದ್ಧಿಕಿ ಹಾಗೂ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ ಅವರು ಕೃಷ್ಣ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ವಾರ್ತೆ

No comments: