ಮುಜರಾಯಿ ಇಲಾಖೆಯಷ್ಟೇ ಅಲ್ಲ, ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ತಾನು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲೆ. ಕಸ ಕೊಟ್ಟರೂ ರಸ ಮಾಡುವ ಶಕ್ತಿ ತನ್ನಲಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಆತ್ಮವಿಶ್ವಾಸ ತುಂಬಿದ ಮಾತುಗಳನ್ನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಅಲ್ಲದೇ, ಯಾವುದೇ ಖಾತೆ ವಹಿಸಿಕೊಳ್ಳುವುದಕ್ಕೂ ತಾನು ಸಿದ್ಧ ಎಂದಿದ್ದಾರೆ. ಮುಜರಾಯಿ ಖಾತೆ ವಹಿಸಿಕೊಳ್ಳಲು ಅನೇಕ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಾರೆ. ಆದರೆ ತನಗೆ ಮುಜರಾಯಿ ಖಾತೆ ತಮಗೆ ಸಿಕ್ಕಿದ್ದೇ ಆದಲ್ಲಿ ಕೆಲಸ ಮಾಡಿ ತೋರಿಸುವೆ ಎಂದರು.
ಸಿಎಂ ತನ್ನ ಮೇಲೆ ವಿಶ್ವಾಸವಿಟ್ಟು ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಟ್ಟರೂ, ಮೌನವಾಗಿ, ಕಾರ್ಯನಿರ್ವಹಿಸುವೆ ಎಂದು ರೇಣುಕಾಚಾರ್ಯ ಹೇಳಿದರು.
Jan 6, 2010
Subscribe to:
Post Comments (Atom)
No comments:
Post a Comment