ನವದೆಹಲಿ, ಬುಧವಾರ, 6 ಜನವರಿ 2010: ಎಂಡೋಸಲ್ಫಾನ್ ಕೀಟ ನಾಶಕದಿಂದ ಉಂಟಾದ ಅನಾಹುತದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ!
ಎಂಡೋಸಲ್ಫಾನ್ನಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇತ್ತೀಚೆಗಷ್ಟೇ ಶೋಭಾ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಇದೀಗ ಎಂಡೋಸಲ್ಫಾನ್ ವಿರುದ್ಧ ಧ್ವನಿ ಎತ್ತಿರುವುದರ ಹಿನ್ನೆಲೆಯಲ್ಲಿ ತನಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಕೀಟ ನಾಶಕದಿಂದ ಉಂಟಾಗಿರುವ ಅನಾಹುತದ ವಿರುದ್ಧ ಹೋರಾಟ ನಡೆಸಿದ್ದೇನೆ. ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಯನ್ನು ಒಳಗೊಂಡಿರುವ ಈ ವಿಷಯದಲ್ಲಿ ನನಗೆ ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿರುವುದಾಗಿ ವಿವರಿಸಿದರು.
ಆದರೆ ಜನರ ಹಿತಕಾಪಾಡಲು ಹೊರಟಿರುವ ತಾನು ಇಂತಹ ಬೆದರಿಕೆಗಳಿಲ್ಲ ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿರುವ ಶೋಭಾ, ಬೆದರಿಕೆ ಕರೆ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದರು.
source: webdunia
Jan 6, 2010
Subscribe to:
Post Comments (Atom)
No comments:
Post a Comment