ಮಂಗಳೂರು:ಮುಸ್ಲಿಮ್ ಲೇಖಕರ ಸಂಘ ಮಂಗಳೂರು ಇದರ ವಾರ್ಷಿಕ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ಹಾಗೂ `ವಿಚಾರಗೋಷ್ಠಿ' ಸಮಾರಂಭ ಜನವರಿ 22ರಂದು ಶುಕ್ರವಾರ ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವುದು. ಪ್ರಶಸ್ತಿಯು 5ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ. ಕಾರ್ಯಕ್ರಮದಲ್ಲಿ ಸಾಮಾಜಿಕ ಸಂಘರ್ಷ ಮತ್ತು ಮಾಧ್ಯಮ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿರುವುದು.
ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಸುರೇಶ್ , ಶಿವಸುಂದರ್ ಮತ್ತು ಯು.ಟಿ.ಖಾದರ್ ಇವರು ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಮುಹಮ್ಮದ್ ಕುಂಞಿ ವಹಿಸಲಿದ್ದು, ಪ್ರಶಸ್ತಿಗೆ ಬೆಂಗಳೂರಿನ ಸಾಹಿತಿ ಕೆ.ಎಸ್.ಆಸಿಫ್ ಆಲಿ ಆಯ್ಕೆಯಾಗಿರುತ್ತಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment