VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 5, 2010

ನೀರಿಗಾಗಿ ಮುತ್ತಿಗೆ


ಮಂಗಳೂರು: ಆಡಳಿತಗಾರರ ನಿರ್ಲಕ್ಷ್ಯ ಹಾಗೂ ನೀರು ಬಿಡುವ ಸಿಬ್ಬಂದಿಗಳ ಬೇಜವಾಬ್ದಾರಿಯ ವಿರುದ್ಧ ಆಕ್ರೋಶ ಗೊಂಡ ಎಸ್‌.ಡಿ.ಪಿ.ಐ ಕಾರ್ಯಕರ್ತರು ಗ್ರಾಮಸ್ಥರ ಸಹಕಾರ ದೊಂದಿಗೆ ನಿನ್ನೆ ಪಾವೂರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಾವೂರು ಗ್ರಾಮದಲ್ಲಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂದೆ ಅಧಿಕಾರದಲ್ಲಿದ್ದ ನಾಗರಿಕ ಸಮಿತಿಯು ಜಿ.ಪಂ ಸದಸ್ಯ ಅಝೀಝ್‌ ಮಲಾರ್‌ ಅವರ ನಿಧಿಯಿಂದ ಹಾಗೂ ಜಿ.ಪಂ ಸಹಕಾರದಿಂದ ಇನೋಳಿ ಕಡವಿನಲ್ಲಿ ತೆರೆದ ಬಾವಿಯನ್ನು ನಿರ್ಮಿಸಿದ್ದರು. ಇದಾದ ಒಂದೂವರೆ ವರ್ಷದಲ್ಲಿ ನಾಗರಿಕ ಸಮಿತಿಯಿಂದ ಆಡಳಿತ ಕೈತಪ್ಪಿತ್ತು. ನಂತರ ಕಾಂಗ್ರೆಸ್‌ ಬೆಂಬಲಿತರು ಆಡಳಿತಕ್ಕೆ ಬಂದಿದ್ದು, ಪೈಪ್‌ಲೈನ್‌ ಕಾಮಗಾರಿಯನ್ನು ಪೂರ್ಣಗೊಳಿಸಿ ಒಂದೂವರೆ ವರ್ಷ ಕಳೆದಿದೆ. ಆದರೂ ಗ್ರಾಮಸ್ಥರು ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಿಲ್ಲ. ಕೇವಲ ಬೇಸಿಗೆ ಕಾಲದಲ್ಲಿ ಮಾತ್ರವಲ್ಲದೆ ಮಳೆಗಾಲದಲ್ಲೂ ಸಾಕಷ್ಟು ನೀರು ಇದ್ದರೂ ಇದನ್ನು ನಿರ್ವಹಿಸುವ ಸಿಬ್ಬಂದಿಗಳು ಬೇಜ ವಾಬ್ದಾರಿಯಾಗಿ ವರ್ತಿಸುತ್ತಿದ್ದರೆ, ಆಡಳಿತಗಾರರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿರುವ ಎಸ್‌.ಡಿ.ಪಿ.ಐ ಸದಸ್ಯರು ಗ್ರಾಮಸ್ಥರ ಸಹಕಾರದೊಂದಿಗೆ ನಿನ್ನೆ ಪ್ರತಿಭಟನೆ ನಡೆಸಿದ್ದು, ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದರೆ ಉಗ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಇಸ್ಮಾಯಿಲ್‌ ಮಲಾರ್‌, ಹನೀಫ್‌, ಮಹಮ್ಮದ್‌, ನೌಫಾಲ್‌ ಮತ್ತಿತರರು ಭಾಗವಹಿಸಿದ್ದರು.

ಕೃಪೆ: ಜಯಕಿರಣ

No comments: