VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಪುಣೆ ಸ್ಫೋಟ ಪ್ರಕರಣದ ಹೊಣೆ ಹೊತ್ತ ಸಂಘಟನೆ

ಪುಣೆಯ ಬೇಕರಿ ಸ್ಫೋಟ ಘಟನೆಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲಕ ಅಪರಿಚಿತ ಸಂಘಟನೆ ಲಷ್ಕರ್-ಎ-ತೊಯ್ಬಾ ಅಲ್ ಅಲ್ಮಿ (ಎಲ್‌ಇಟಿ) ಹೊತ್ತುಕೊಂಡಿದೆ.

ನವದೆಹಲಿ (ಐಎಎನ್‌ಎಸ್):ಪುಣೆಯ ಬೇಕರಿ ಸ್ಫೋಟ ಘಟನೆಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲಕ ಅಪರಿಚಿತ ಸಂಘಟನೆ ಲಷ್ಕರ್-ಎ-ತೊಯ್ಬಾ ಅಲ್ ಅಲ್ಮಿ (ಎಲ್‌ಇಟಿ) ಹೊತ್ತುಕೊಂಡಿದೆ.

ಸಂಘಟನೆ ವಕ್ತಾರ ಅಬು ಜಿಂದಾಲ್ ಎಂದು ಹೇಳಿಕೊಂಡ ವ್ಯಕ್ತಿ ಮಂಗಳವಾರ ವಾಜಿರಿಸ್ತಾನದಿಂದ ಪಾಕ್ ಮೂಲಕ ಭಾರತೀಯ ಪತ್ರಕರ್ತ ನಿರುಪಮಾ ಸುಬ್ರಹ್ಮಣ್ಯಂ ಅವರಿಗೆ ಕರೆ ಮಾಡಿ ಸ್ಫೋಟಕ್ಕೆ ತಾವೇ ಹೊಣೆ ಎಂದು ಹೇಳಿದ್ದಾನೆ.

ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಚರ್ಚಿಸಲು ಭಾರತ ನಿರಾಕರಿಸಿರುವದನ್ನು ಮತ್ತು ಅಮೆರಿಕದೊಂದಿಗಿನ ಭಾರತದ ಮೈತ್ರಿ ಖಂಡಿಸಿಸ್ಫೋಟ ಎಸಗಿದ್ದಾಗಿ ಹೇಳಿದೆ.

ನಾಲ್ವರ ಬಂಧನ: ಘಟನೆಗೆ ಸಂಬಂಧಿಸಿದಂತೆ ರಾತ್ರಿ ಇನ್ನಿಬ್ಬರನ್ನು ಬಂಧಿಸಿದ್ದು, ಒಟ್ಟಾರೆ ಈತನಕ ನಾಲ್ವರನ್ನು ಬಂಧಿಸಿಲಾಗಿದೆ.

ಪ್ರಜಾವಾಣಿ ವಾರ್ತೆ

No comments: