ಸಕಲೇಶಪುರ: ಏಪ್ರಿಲ್ ೧೦ : ನಗರದ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಹೆಚ್. ಆದಂ ಮತ್ತು ಉಪಾಧ್ಯಕ್ಷರಾಗಿ ಬಿ.ಎಸ್. ಅಬ್ದುಲ್ ಖಾದರ್ ಅವಿರೋಧವಾಗಿ ಆಯ್ಕೆಯಾದರು.
ನಗರದ ನೂರುಲ್ ಇರ್ಷಾದ್ ಅರಬಿ ಮದರಸ ಹಾಲಿನಲ್ಲಿ ಜನಾಬ್ ಇಬ್ನು ಮೌಲಾನ ತಂಗಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಜಮಾತ್ ಸರ್ವ ಸದಸ್ಯರ ಮಹಾಸಭೆಯಲ್ಲಿ ಈ ಕೆಳಕಂಡ ಪಧಾದಿಕಾರಿಗಳನ್ನು ಆಯ್ಕೆಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಹಸೈನ್ ಜೊತೆ ಕಾರ್ಯದರ್ಶಿಯಾಗಿ ಅಂಚೆ ಇಲಾಖೆಯ ಅಬ್ದುಲ್ ರಹಿಮಾನ್ ಸದಸ್ಯರುಗಳಾಗಿ ಅಕ್ಬರ್ ಜುನೈದ್ , ಸಲಾಂ , ಅಬ್ದುಲ್ ಲತೀಫ್ , ಖಾಲಿದ್.ಎಸ್.ಎ, ಗ್ರೀನ್ ಲ್ಯಾಂಡ್ ಅಬ್ಬು , ಖಾದರ್ , ಮಜೀದ್, ಅಸ್ಮಾಲ್ .ಪುತ್ತಬ್ಬ ಅವಿರೋಧವಾಗಿ ಆಯ್ಕೆಯಾದರು.
ಬದ್ರಿಯಾ ಮಸೀದಿಯ ನೂತನ ಆಡಳಿತ ಸಮಿತಿಯ ಪಧಾದಿಕಾರಿಗಳಿಗೆ ಅಜಾದ್ ಯಂಗಮನ್ ಅಸೋಷಿಯೇಶನ್ ಅಧ್ಯಕ್ಷರಾದ ಜನಾಬ್ : ಕಶ್ವ ಸುಲೈಮಾನ್ , ಪ್ರಧಾನ ಕಾರ್ಯದರ್ಶಿ ನಿಜಾರ್ ಮಂಜ್ರಾಬಾದ್, ಮುಸ್ಲಿಂ ಮುಖಂಡ ಮೊಹಮ್ಮದ್ ಎಸ್.ಎ.ರವರು ಅಭಿನಂದನೆ ಸಲ್ಲಿಸಿದ್ದಾರೆ
Subscribe to:
Post Comments (Atom)
No comments:
Post a Comment