ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ ಹಿಂದೂ ಜಾಗೃತಿ ಸಭೆಯಿಂದ ಮುಸ್ಲಿಂ ವರದಿಗಾರನನ್ನು ಹೊರ ಹಾಕಿದ ಘಟನೆ ನಿನ್ನೆ ಸಂಭವಿಸಿದೆ.
ಸ್ಥಳೀಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಅಶ್ರಫ್ ಅಲಿಕುಂಞಿ ಹಿಂದೂ ಜಾಗೃತಿ ಸಭೆಯ ವರದಿ ಮಾಡಲು ಬಂದಿದ್ದರು. ಸಭೆಯ ಸಿದ್ದತೆ ನಡೆಯುತ್ತಿದ್ದಾಗ ಅಶ್ರಫ್ ಪತ್ರಕರ್ತರ ಆಸನದಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ಸಂಘಟಕರು ಇಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ ಎಂದು ತಿಳಿಸಿ ಅವರನ್ನು ಹೊರ ಹೋಗುವಂತೆ ಒತ್ತಾಯಿಸಿದರು. ತಾನು ಪತ್ರಿಕೆಯ ವರದಿಗಾರನಾಗಿ ಇಲ್ಲಿಗೆ ಬಂದಿದ್ದೇನೆ ಮುಸ್ಲಿಂನಾಗಿ ಅಲ್ಲ ಎಂದು ಅಶ್ರಫ್ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಸಂಘಟಕರು ಇರಲಿಲ್ಲ.
ನಿನ್ನೆಯ ಸಭೆ ಗುಪ್ತವಾದುದೇನೂ ಆಗಿರಲಿಲ್ಲ. ಮೈಕ್ ಬಳಸಿಯೆ ಭಾಷಣ ಮಾಡಿದ್ದಾಗಿದೆ. ಆದರೂ ಮುಸ್ಲಿಂ ವರದಿಗಾರನಿಗೆ ಹೊರಗೆ ಕಳುಹಿಸಿದ್ದು ಏಕೆ ಎಂಬುದು ಈಗ ಪ್ರಶ್ನೆಯಾಗಿದೆ.
ಹಿಂದೂ ಜನ ಜಾಗೃತಿಯ ಪರವಾಗಿ ರಮೇಶ್ ನಾಯಕ್ ಎಂಬವರು ಎಲ್ಲ ಪತ್ರಿಕೆಗಳಿಗೂ ಆಮಂತ್ರಣ ನೀಡಿ ಪತ್ರಕರ್ತರನ್ನು ಆಹ್ವಾನಿಸಿದ್ದರು. ವರದಿ ಮಾಡಲು ಹೋದ ವರದಿಗಾರನನ್ನು ಅವಮಾನಿಸಿ ಕಳುಹಿಸಿದರು.
source: jayakirana
Jan 27, 2010
Subscribe to:
Post Comments (Atom)
1 comment:
THIS IS VERY VERY BAD ATTITUDE OF HINDU JAGRATI SAMITI. FROM THIS INCIDENT WE ALL CAME TO UNDERSTAND THAT HOW MUCH THESE SANGAPARIVAR PEAPLE HATE MUSLIMS. THIS IS AN BIG BAD REMARK TO HINDU RELIGION. GOD BLESS THEM.
Post a Comment