VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 23, 2010

ಮಾರ್ಚ್ 26 ರಂದು ಸ್ತುತಿ ಇನ್ಫಾರ್ಮೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ಕರೆಯನ್ನು ಕೊಂದವರು ಯಾರು ? ಮತ್ತು ಪತ್ರಕರ್ತನ ಜೈಲಿನ ದಿನಗಳು ಕೃತಿ ಬಿಡುಗಡೆ.


ಮಾರ್ಚ್ 26 ರಂದು ಸ್ತುತಿ ಪಬ್ಲಿಕೇಶನ್ ಅಂಡ್ ಇನ್ಫಾರ್ಮೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ಕರೆಯನ್ನು ಕೊಂದವರು ಯಾರು ? ಮತ್ತು ಪತ್ರಕರ್ತನ ಜೈಲಿನ ದಿನಗಳು ಕೃತಿ ಬಿಡುಗಡೆ ಸಮಾರಂಭ ಬೆಂಗಳೂರಿನ ಸರ್ಕಾರಿ ನೌಕರರ ಅಸೋಸಿಯೇಶನ್ ಆಡಿಟೋರಿಯಂ ( ಎನ್.ಜಿ.ಓ. ಹಾಲ್ ) ನಲ್ಲಿ ಅಪರಾಹ್ನ ಮೂರು ಘಂಟೆಗೆ ನಡೆಯಲಿದೆ.
ಸ್ತುತಿ ಪಬ್ಲಿಕೇಶನ್ ಅಂಡ್ ಇನ್ಫಾರ್ಮೇಶನ್ ಟ್ರಸ್ಟ್ ಅಧ್ಯಕ್ಷರಾದ ಜನಾಬ್: ಕೆ.ಎಂ. ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು
"ಕರ್ಕರೆಯನ್ನು ಕೊಂದವರು ಯಾರು?" ಕೃತಿಯನ್ನು ಮಹಾರಾಷ್ಟ್ರದ ಮಾಜಿ ಪೋಲಿಸ್ ಮಹಾನಿರೀಕ್ಷಕರಾದ ಶ್ರೀ ಎಸ್.ಎಂ. ಮುಶ್ರಿಫ್ ಬಿಡುಗಡೆ ಮಾಡಲಿದ್ದಾರೆ. " ಪತ್ರಕರ್ತನ ಜೈಲಿನ ದಿನಗಳು"ಕೃತಿಯನ್ನು ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಮತ್ತು ದಲಿತ್ ವಾಯ್ಸ್ ಪತ್ರಿಕೆಯ ಸಂಪಾದಕ ಶ್ರೀ ವಿ.ಟಿ. ರಾಜಶೇಕರ್ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಬರಹಗಾರ ಶ್ರೀ ಶಿವಸುಂದರ್, ಮಾನವ ಹಕ್ಕುಗಳ ಹೋರಾಟಗಾರ ಶ್ರೀ ಸುರೇಶ ಭಟ್ ಬಾಕ್ರಬೈಲು , ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಶ್ರೀ ಎ.ಆರ್. ಇನ್ಫೆಂಟ್ , ಗೌರಿ ಲಂಕೇಶ್ ಸಹಿತ ಹಲವಾರು ಪ್ರಗತಿಪರರು ಭಾಗವಹಿಸಲಿದ್ದಾರೆ.