
ಸುಳ್ಯ: ಕಲ್ಲುಗುಂಡಿ ಬಾಚಿಗದ್ದೆಯಿಂದ 2009ರ ನವಂಬರ್ನಲ್ಲಿ ಕಾಣೆಯಾದ ಯುವತಿಯೊಬ್ಬಳು ಪುತ್ತೂರಿ ನಲ್ಲಿ ಪ್ರಿಯಕರ ನೊಂದಿಗೆ ಪತ್ತೆಯಾದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಕಲ್ಲುಗುಂಡಿಯ ಬಾಚಿಗದ್ದೆ ಚನಿಯ ಪುಜಾರಿಯವರ ಪುತ್ರಿ ದೀಪ ಯಾನೆ ಗೀತಾ(24) ಎಂಬ ಯುವತಿ ನವಂಬರ್ 11, 2009ರಂದು ನಾಪತ್ತೆ ಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿ ಬೀಡಿಕಟ್ಟುವ ಕೆಲಸ ಮಾಡಿಕೊಂಡಿದ್ದು, ಬೀಡಿ ಕೊಡಲೆಂದು ಬ್ರಾಂಚಿಗೆ ಹೋದವಳು ನಾಪತ್ತೆಯಾಗಿದ್ದಳು. ನಾಪತ್ತೆಯಾದ ಯುವತಿ ಪುತ್ತೂರಿನಲ್ಲಿ ಪ್ರೀತಿಸಿದ ಯುವಕನನ್ನು ರಿಜಿಸ್ಟ್ಟರ್ಡ್ ವಿವಾಹವಾಗಿದ್ದಳು. ಪ್ರಿಯಕರ ಪುತ್ತೂರಿನ ಸುಳ್ಯ ಪದವು ಕನ್ನಡ್ಕ ನಿವಾಸಿ ವಾಸುದೇವ ಗೌಡರ ಪುತ್ರ ಬಾಲಕೃಷ್ಣ (40) ಎಂಬವರೊಂದಿಗೆ ಮಾ. 21ರಂದು ಪುತ್ತೂರಿನಲ್ಲಿ ಪತ್ತೆಯಾಗಿದ್ದಳು. ಯುವಕ ಈ ಹಿಂದೆ ಒಂದು ಮದುವೆಯಾಗಿದ್ದು, ಆ ಬಳಿಕ ಅವಳಿಗೆ ವಿಚ್ಛೇಧನ ಕೊಟ್ಟಿದ್ದನು. ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿದ್ದ ಈತ ಕಲ್ಲುಗುಂಡಿಯ ದೀಪಗಳೊಂದಿಗೆ ಈಗ ಎರಡನೇ ಮದುವೆಯಾಗಿದ್ದಾನೆ. ಸುಳ್ಯ ಪೊಲೀಸರು ಯುವತಿ ಮನೆಯವರಿಗೆ ಹಸ್ತಾಂತರಿಸಿದ್ದಾರೆ.
ಸುಳ್ಯ ತಾಲೂಕಿನ ಕಲ್ಲುಗುಂಡಿಯ ಬಾಚಿಗದ್ದೆ ಚನಿಯ ಪುಜಾರಿಯವರ ಪುತ್ರಿ ದೀಪ ಯಾನೆ ಗೀತಾ(24) ಎಂಬ ಯುವತಿ ನವಂಬರ್ 11, 2009ರಂದು ನಾಪತ್ತೆ ಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿ ಬೀಡಿಕಟ್ಟುವ ಕೆಲಸ ಮಾಡಿಕೊಂಡಿದ್ದು, ಬೀಡಿ ಕೊಡಲೆಂದು ಬ್ರಾಂಚಿಗೆ ಹೋದವಳು ನಾಪತ್ತೆಯಾಗಿದ್ದಳು. ನಾಪತ್ತೆಯಾದ ಯುವತಿ ಪುತ್ತೂರಿನಲ್ಲಿ ಪ್ರೀತಿಸಿದ ಯುವಕನನ್ನು ರಿಜಿಸ್ಟ್ಟರ್ಡ್ ವಿವಾಹವಾಗಿದ್ದಳು. ಪ್ರಿಯಕರ ಪುತ್ತೂರಿನ ಸುಳ್ಯ ಪದವು ಕನ್ನಡ್ಕ ನಿವಾಸಿ ವಾಸುದೇವ ಗೌಡರ ಪುತ್ರ ಬಾಲಕೃಷ್ಣ (40) ಎಂಬವರೊಂದಿಗೆ ಮಾ. 21ರಂದು ಪುತ್ತೂರಿನಲ್ಲಿ ಪತ್ತೆಯಾಗಿದ್ದಳು. ಯುವಕ ಈ ಹಿಂದೆ ಒಂದು ಮದುವೆಯಾಗಿದ್ದು, ಆ ಬಳಿಕ ಅವಳಿಗೆ ವಿಚ್ಛೇಧನ ಕೊಟ್ಟಿದ್ದನು. ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿದ್ದ ಈತ ಕಲ್ಲುಗುಂಡಿಯ ದೀಪಗಳೊಂದಿಗೆ ಈಗ ಎರಡನೇ ಮದುವೆಯಾಗಿದ್ದಾನೆ. ಸುಳ್ಯ ಪೊಲೀಸರು ಯುವತಿ ಮನೆಯವರಿಗೆ ಹಸ್ತಾಂತರಿಸಿದ್ದಾರೆ.
No comments:
Post a Comment