ದೋಹಾ (ಕತಾರ್) ಮಾರ್ಚ್ ೯ : ಭಾರತದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಮುಂದಾಗುವಂತೆ ಅನಿವಾಸಿ ಭಾರತೀಯರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕಾರಿಣಿ ಸದಸ್ಯರಾದ ಜನಾಬ್: ಇಲ್ಯಾಸ್ ತುಂಬೆ ಕರೆ ನೀಡಿದರು.
ಅವರು ಇಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಂ ಕತಾರ್ ಘಟಕ ಹಮ್ಮಿಕೊಂಡಿದ್ದ ಸಮುದಾಯದ ಸಬಲೀಕರಣ ಎಂಬ ವಿಚಾರ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಸಾಚಾರ್ ಸಮಿತಿಯ ವರದಿಯಂತೆ ಭಾರತದಲ್ಲಿ ಮುಸ್ಲಿಮರು ಅತ್ಯಂತ ಹಿಂದುಳಿದಿದ್ದು ಮುಸ್ಲಿಂ ಸಮುದಾಯದ ಅಭಿವೃದ್ದಿಗಾಗಿ ಕೇವಲ ಸರ್ಕಾರದ ಸಹಾಯವನ್ನು ನೆಚ್ಚಿ ಕೂರದೆ ತಾವೇ ತಮ್ಮ ಸಮುದಾಯದ ಸಬಲೀಕರಣಕ್ಕಾಗಿ ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ. ಎಫ್ .ಎಫ್. ದೋಹಾ ಕತಾರ್ ಘಟಕದ ಅಧ್ಯಕ್ಷರಾದ ಜನಾಬ್ ಅಜೀಜ್ ಸುಭಾನ್ ಶಿವಮೊಗ್ಗ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಐ.ಎಫ್.ಎಫ್. ಸಂಯೋಜಕರಾದ ಜನಾಬ್: ಅಬ್ದುಲ್ ರಶೀದ್ ಸಾಹೇಬ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಬ್ದುಲ್ ಲತೀಫ್ ಮಡಿಕೇರಿ, ಪಿ.ಎಫ್.ಐ. ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಜನಾಬ್: ಶರೀಫ್ ಕೊಡಾಜೆ ಭಾಗವಹಿಸಿದ್ದರು.
ಜನಾಬ್: ಮಹಮ್ಮದ್ ಸಲೀಂ ಬಂದಾಡಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಇಮ್ತಿಯಾಜ್. ಮಂಗಳೂರು (ದೋಹಾ . ಕತಾರ್)
1 comment:
Very Good IFF go ahead.
Post a Comment