ಮಂಗಳೂರು ಖಾಝಿಯಾಗಿ ಪ್ರಸಿದ್ಧ ಇಸ್ಲಾಮಿಕ್ ಮತ ಪಂಡಿತ, ಸೂಫಿವರ್ಯರು ಆದ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ನಗರದ ಬಂದರ್ನಲ್ಲಿರುವ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಮಾ.20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ರವರು ಖಾಝಿ ಪಟ್ಟವನ್ನು ನೀಡಲಿದ್ದಾರೆ. ಕಾಸರಗೋಡು ಸಂಯುಕ್ತ ಖಾಝಿ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ತ್ವಾಕಾ ಅಹ್ಮದ್ ಮುಸ್ಲಿಯಾರ್ ಕಾಸರಗೋಡು ಜಿಲ್ಲೆಯ ಚೆಂಬರಿಕ ಎಂಬಲ್ಲಿ 1947 ಆ. 10ರಂದು ಜನಿಸಿ ಉತ್ತರ ಪ್ರದೇಶದ ದೇವ್ಬಂದ್ನ ಅರೆಬಿಕ್ ಕಾಲೇಜಿನಲ್ಲಿ ದೌರ ಹದೀಸ್, ದೌರಾ ಮಹ್ಕೂಲತ್, ದೌರ ಅದಬ್ ಮತ್ತು ದೌರ ತಪ್ಲೀರ್ ಎಂಬ ನಾಲ್ಕು ಪದವಿಗಳನ್ನು ಗಳಿಸಿದ್ದಾರೆ.
ಈಜಿಪ್ಟ್ನ ಅಝ್ಹರ್ ವಿ.ವಿ.ಯಿಂದ ಅಡಿಸ್ಥಾನ ಕರ್ಮ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಸುಮಾರು 30ವರ್ಷಗಳ ಕಾಲ ಒಮಾನ್ನ ಸಲಾಲದ ತ್ವಾಕಾ ಎಂಬಲ್ಲಿ ಸುಲ್ತಾನರ ಮಸೀದಿಯಲ್ಲಿ ಇಮಾಮ್ ಮತ್ತು ಮುದ್ದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ತ್ವಾಕಾ ಉಸ್ತಾದರಿಗೆ ದ.ಕ. ಜಿಲ್ಲೆಯೊಂದಿಗೆ ಬಹಳ ಹಿಂದಿನಿಂದಲೇ ಸಂಪರ್ಕವಿದ್ದು, ಇವರು ಪುತ್ತೂರಿನ ಕಂಬ್ಲೋಟ್ ಮಹಮ್ಮದ್ ಮುಸ್ಲಿಯಾರ್ ಕುಟುಂಬದಿಂದ ವಿವಾಹವಾಗಿದ್ದಾರೆ. ಮಂಗಳೂರು ಖಾಝಿ ಚೆಂಬರಿಕ ಉಸ್ತಾದರ ಸಹೋದರಿಯ ಪುತ್ರ. ಪದಗ್ರಹಣ ಸಮಾರಂಭದಲ್ಲಿ ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿ ಕೋಶಾಧಿಕಾರಿ ಎಸ್.ಎಂ. ರಶೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Mar 19, 2010
Subscribe to:
Post Comments (Atom)
No comments:
Post a Comment