VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 28, 2010

ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.

ದುಬೈ - ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಇದೆ ಬರುವ ಶುಕ್ರವಾರ ತಾ. 30ರ ಎಪ್ರಿಲ್ 2010 ರಂದು ಇರಾನಿ ಕ್ಲಬ್ ಅಡಿಟೋರಿಯಂ - ಉಧ್ ಮೇಥಾ ರೋಡ್, ದುಬೈಯಲ್ಲಿ
ಕರ್ನಾಟಕ ಇಸ್ಲಾಮಿಕ್ ಸೆಂಟರ್ - ಯು.ಎ.ಇ. ಇದರ ವತಿಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಅದರೊಂದಿಗೆ ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆಯನ್ನು ಮಾಡುವುದಾಗಿ ಸಂಘಟಕರು ತಿಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಮುಖ್ಯ ಪ್ರಮುಖ ಅತಿಥಿಗಳಾಗಿ
ಜನಾಬ್ ಕೆ.ಪಿ. ಅಹ್ಮದ್ ಹಾಜಿ (ಅಧ್ಯಕ್ಷರು ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ, ಕುಂಬ್ರ)
ಜನಾಬ್ ಹನೀಫ್ ಹಾಜಿ ಗೋಳ್ತಮಜಲ್ (ಕಾರ್ಯದರ್ಶಿ, ಮುಸ್ಲಿಂ ಸೆಂಟ್ರಲ್ ಕಮೀಟಿ ಮಂಗಳೂರು)
ಜನಾಬ್ ಎಂ.ಕೆ. ಬ್ಯಾರಿ (ಗೌರವಾದ್ಯಕ್ಷರು, K.I.C. U.A.E.) ಹಾಗು ಹೆಚ್ಚಿನ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ.
ಸಮಾರಂಭಕ್ಕೆ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ, ಮದ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ West Hotel ದೇರಾ, ನಾಸರ್ ಸ್ಕ್ವೇರ್ ಮಸೀದಿ ದೇರಾ, ಫಾರೂಕ್ ಮಸೀದಿ ಬರ್ ದುಬೈ -ಇಲ್ಲಿಂದ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ.

No comments: