VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಏಷ್ಯಾಕಪ್ ಕ್ರಿಕೆಟ್: ಜೂ.7ರಂದು ತಂಡದ ಆಯ್ಕೆ

ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಆಯ್ಕೆ ಜೂ.7ರಂದು ನವದೆಹಲಿಯಲ್ಲಿ ನಡೆಯಲಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ ಪೂರ್ಣ ಸಾಮರ್ಥ್ಯದ ಸಂಡವನ್ನು ಆಯ್ಕೆ ಮಾಡಲಿದೆ. ಈಗಾಗಲೇ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಗೆ ಭಾರತ ಎರಡನೇ ದರ್ಜೆ ತಂಡವನ್ನು ಕಳುಹಿಸಿದೆ.

ನಾಲ್ಕು ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾ ಕಪ್ ಟೂರ್ನಿ ಜೂ.15ರಂದು ಆರಂಭವಾಗಲಿದೆ. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ಹಣಾಹಣಿ ನಡೆಯಲಿದೆ. ಭಾರತ ಜೂ.16ರಂದು ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದ ಎದುರು ಆಡಲಿದೆ. ಟೂರ್ನಿಯ ಫೈನಲ್ ಜೂ.24ರಂದು ನಡೆಯಲಿದೆ.

ಏಷ್ಯಾಕಪ್ ವೇಳಾಪಟ್ಟಿ
ಜೂ.15: ಶ್ರೀಲಂಕಾ- ಪಾಕಿಸ್ತಾನ
ಜೂ.16: ಭಾರತ- ಬಾಂಗ್ಲಾ
ಜೂ.18: ಶ್ರೀಲಂಕಾ- ಬಾಂಗ್ಲಾ
ಜೂ.19: ಪಾಕಿಸ್ತಾನ- ಭಾರತ
ಜೂ.21: ಪಾಕಿಸ್ತಾನ- ಬಾಂಗ್ಲಾ
ಜೂ.22: ಭಾರತ- ಶ್ರೀಲಂಕಾ
ಜೂ.24: ಫೈನಲ್

No comments: