ರಾತ್ರಿ ಪ್ರಧಾನಿ ಗೃಹದಲ್ಲಿ ಏರ್ಪಡಿಸಿದ್ದ ಭೋಜನ ಕೂಟವನ್ನು ಸಹ ರದ್ದು ಮಾಡಲಾಗಿದೆ.
ನವದೆಹಲಿ (ಪಿಟಿಐ): ಶನಿವಾರ ಸಂಜೆ ನಡೆಯಬೇಕಾಗಿದ್ದ ಯುಪಿಎ ಸರ್ಕಾರದ ವರ್ಷಾಚರಣೆ ಸಮಾರಂಭವನ್ನು ಸರ್ಕಾರ ಮುಂದೂಡಿದೆ. ರಾತ್ರಿ ಪ್ರಧಾನಿ ಗೃಹದಲ್ಲಿ ಏರ್ಪಡಿಸಿದ್ದ ಭೋಜನ ಕೂಟವನ್ನು ಸಹ ರದ್ದು ಮಾಡಲಾಗಿದೆ.
ಸಿಂಗ್ ಸಂತಾಪ:
ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಮೃತರ ಕುಟುಂಬ ವರ್ಗಕ್ಕೆ ದೇವರು ಶಕ್ತಿ ತುಂಬಲಿ ಎಂದು ಹೇಳಿದ್ದಾರೆ.
ತನಿಖೆ ನಡೆಸಿ: ಸೂಕ್ತ ತನಿಖೆ ನಡೆಸಿ ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಬೇಕೆಂದು ಸಿಪಿಎಂ ಹೇಳಿದೆ.
ಶೋಕ: ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸಂತಾಪ: ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅನುಪಮ ಖೇರ್, ಶಮ್ಮಿ ಕಪೂರ್, ಗುಲ್ಪನಾಗ್, ಮಲ್ಲಿಕಾ ಶೆರಾವತ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ನಿರ್ದೇಶಕ ಕರಣ್ ಜೋಹರ್ ಸಹ ಸಂತಾಪ ಸೂಚಿಸಿ ಧೈರ್ಯ ತಂದುಕೊಳ್ಳುವಂತೆ ಮೃತರ ಕುಟುಂಬಗಳಿಗೆ ತಮ್ಮ ಬ್ಲಾಗ್ಗಳ ಮೂಲಕ ಸಾಂತ್ವನ ಹೇಳಿದ್ದಾರೆ.
May 23, 2010
Subscribe to:
Post Comments (Atom)
No comments:
Post a Comment