May 28, 2010
ಹಣ ಪಡೆದು ಗಲಭೆ ಸಂಚು: ಮುತಾಲಿಕ್ ವಿರುದ್ಧ ಮೊಕದ್ದಮೆ ದಾಖಲು
ಹುಬ್ಬಳ್ಳಿ, ಮೇ ೨೭: ಹಣ ಪಡೆದು ಗಲಭೆ ಸೃಷ್ಟಿಸುವ ಸಂಚಿನ ಆರೋಪದ ಮೇಲೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಆಜ್ತಕ್, ಹೆಡ್ಲೈನ್ಸ್ ಟುಡೆ ಮತ್ತು ತೆಹಲ್ಕಾ ಡಾ.ಕಾಮ್ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ಪ್ರಮೋದ್ ಮುತಾಲಿಕ್ ಹಣ ಪಡೆದು ಗಲಭೆ ಸೃಷ್ಟಿಸುವುದಾಗಿ ಹೇಳಿಕೊಂಡಿದ್ದರು.
ಈ ಸಂಬಂಧದ ಸಿಡಿಯನ್ನು ಪರಿಶೀಲಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಆದುದರಿಂದ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಸಿ ಸೆಕ್ಷನ್ ೧೫೩‘ಎ’ ಮತ್ತು ೧೨೦ ‘ಬಿ’ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ದಂಗೆ ಸೃಷ್ಟಿಸಿಲು ಸಂಚು, ಗಲಭೆಗೆ ಪ್ರಚೋದನೆ, ಪ್ರಭುತ್ವದ ವಿರುದ್ಧ ಷಡ್ಯಂತರ ರೂಪಿಸಿದ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲೆಯ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ರನ್ನು ಶೀಘ್ರದಲ್ಲೆ ಬಂಧಿಸುವ ಸಾಧ್ಯತೆಗಳಿಗೆ ಎಂದು ಇಲಾಖೆಯ ಮೂಲಗಳು ಹೇಳಿವೆ.
Subscribe to:
Post Comments (Atom)
No comments:
Post a Comment