ಕಾಸರಗೋಡು: ಎ.ಎಸ್.ಐಯ ಪತ್ನಿ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಪೊಲೀಸ್ ಪೇದೆಯೋರ್ವನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಹಿರಿಯ ಅಧಿಕಾರಿಯ ಪತ್ನಿಯನ್ನೇ ಚಕ್ಕಂದಕ್ಕೆ ಬಳಸಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಆರೋಪದಲ್ಲಿ ಕಾನ್ಸ್ಟೇಬಲ್ ಅಮಾನತಾಗಿದ್ದಾನೆ. ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್, ಪಿಲಿಕ್ಕೋಡು ನಿವಾಸಿಯೂ ಆಗಿರುವ ಸುರೇಶ್ ಬಾಬು ಅಮಾನತು ಶಿಕ್ಷೆಗೊಳಗಾದವ. ಜಿಲ್ಲಾ ಪೊಲೀಸಧಿಕಾರಿ ಪಿ. ಪ್ರಕಾಶ್ ಈ ಕ್ರಮ ತೆಗೆದುಕೊಂಡಿದ್ದಾರೆ.
ಕಾಸರಗೋಡು ಕಂಟ್ರೋಲ್ ರೂಂನ ಎಎಸ್ಐ ರವೀಂದ್ರನ್ ಎಂಬವರ ಪತ್ನಿ ಪ್ರಸೀದಾ(34) ಆತ್ಮಹತ್ಯೆಗೈದವರು. ಈ ತಿಂಗಳ 12ರಂದು ಬೆಳಿಗ್ಗೆ ನೀಲೇಶ್ವರ ಪಳ್ಳಿಕೆರೆ ಗೇಟ್ ಸಮೀಪ ರೈಲು ಹಳಿಯಲ್ಲಿ ಇವರ ಶವ ಪತ್ತೆಯಾಗಿತ್ತು. ಇದರ ಹಿಂದಿನ ದಿನ ತಡರಾತ್ರಿ ಎಎಸ್ಐ ರವೀಂದ್ರನ್ ಮನೆಗೆ ಬಂದಾಗ, ಕಾನ್ಸ್ಟೇಬಲ್ ಸುರೇಶ್ ಬಾಬುನನ್ನು ಇವರ ಮನೆಯೊಳಗೆ ಕಾಣಬಾರದ ಸ್ಥಿತಿಯಲ್ಲಿ ಕಂಡಿದ್ದರು. ಪರಾರಿಯಾಗಲೆತ್ನಿಸಿದ ಸುರೇಶ್ ಬಾಬುವಿನ ಮುಖ ಹಾಗೂ ಕೈಗೆ ರವೀಂದ್ರನ್ ಕಚ್ಚಿ ಗಾಯಗೊಳಿಸಿದ್ದರು. ಮನೆಯಿಂದ ಸುರೇಶ್ ಬಾಬುವಿನ ಮೊಬೈಲ್ ಕೂಡ ಪತ್ತೆಯಾಗಿತ್ತು.
ರವೀಂದ್ರನ್ ನೀಡಿದ ದೂರಿನಂತೆ ಸುರೇಶ್ ಬಾಬುವನ್ನು ನೀಲೇಶ್ವರ ಸರ್ಕಲ್ ಇನ್ಸ್ಪೆಕ್ಟರ್ ವಿಚಾರಣೆಗೆ ಒಳಪಡಿಸಿ ಜಿಲ್ಲಾ ಪೊಲೀಸ್ ಅಧಿಕಾರಿಗೆ ವರದಿ ಸಲ್ಲಿಸಿದ್ದರು. ಇದರಂತೆ ಇದೀಗ ಕ್ರಮ ಜರಗಿಸಲಾಗಿದೆ.
Subscribe to:
Post Comments (Atom)
No comments:
Post a Comment