
ಮಂಗಳೂರು: ತಾನು ಕ್ರೈಸ್ತಳಾಗಿದ್ದರೂ ಆತನ ಮಾವನ ಮಾತಿಗೆ ಬೆಲೆ ಕೊಟ್ಟು ಹಿಂದೂ ಧರ್ಮ ಪ್ರಕಾರ ರಿಜಿಸ್ಟ್ರಾರ್ ಮತ್ತು ದೇವಸ್ಥಾನದಲ್ಲಿ ಮದುವೆಯಾದೆ. ಆದರೂ ನನ್ನನ್ನು ವಂಚಿಸಿದ ಯುವಕ ಹಾಗೂ ಆತನ ಕುಟುಂಬಸ್ಥರು ನನ್ನ ಮೇಲೆಯೇ ಮತಾಂತರದ ಆರೋಪ ಹೊರಿಸಿ ದರು. ಇದು ಶಕ್ತಿನಗರದ ಯುವಕನೋರ್ವನಿಂದ ವಂಚನೆಗೆ ಒಳಗಾದ ಕ್ರೈಸ್ತ ಯುವತಿಯ ಕಥೆ-ವ್ಯಥೆ.
ಶಕ್ತಿನಗರದಲ್ಲಿ ಬ್ಯೂಟಿಶಿಯನ್ ಆಗಿದ್ದ ರೇಖಾ ತನ್ನ ನೆರೆಯ ಹಿಂದೂ ಯುವಕ ಕಿಶೋರ್ನನ್ನು ತಾಯಿಯ ಒಪ್ಪಿಗೆಯೊಂದಿಗೆ ಮದುವೆಯಾಗಿ ದ್ದರೂ ಆಕೆಯನ್ನು ವಂಚಿಸಿದ ಯುವಕನ ಕುಟುಂಬಸ್ಥರು ಆಕೆಯ ಮೇಲೆಯೇ ಮತಾಂತ ರದ ಆರೋಪ ಹೊರಿಸಿದ್ದರಿಂದ ನೊಂದ ಆಕೆ ಫೆಬ್ರವರಿ 25ರಂದು ಆತ್ಮಹತ್ಯೆಗೂ ಯತ್ನಿಸಿದ್ದಳು. ಈಗ ಬೆಂದೂರ್ವೆಲ್ನಲ್ಲಿರುವ ಸಮಾಜ ಸೇವಾ ಕಾರ್ಯಕರ್ತೆಯೋರ್ವರ ಮನೆಯಲ್ಲಿ ಆಶ್ರಯ ಪಡೆದಿದ್ದು ನಿನ್ನೆ ಪತ್ರಕರ್ತರೊಂದಿಗೆ ತನ್ನ ಹಾಗೂ ಕಿಶೋರ್ನ ವೃತ್ತಾಂತವನ್ನು ತೆರೆದಿಟ್ಟಿದ್ದಾಳೆ.
ಕಿಶೋರ್ನ ಮಾವನ ವಿನಂತಿ ಮೇರೆಗೆ ನಾನು ಫೆ. 13, 2007ರಲ್ಲಿ ಆತನನ್ನು ಮಂಗಳೂರಿನಲ್ಲಿ ರಿಜಿಸ್ಟ್ರಾರ್ ವಿವಾಹ ಆಗಿ ಬಂದರ್ನಲ್ಲಿರುವ ದೇವಿ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ ಪ್ರಕಾರ ಮದುವೆಯಾಗಿದ್ದವು. ಆ ಸಂದರ್ಭದಲ್ಲಿ ಅಲ್ಲಿನ ಅರ್ಚಕ ತಮ್ಮಿಬ್ಬರ ಸಹಿಯನ್ನು ಪಡೆದುಕೊಂಡರು. ಆಗ ನನ್ನ ಪರವಾಗಿ ತಾಯಿ ಆಶಾ ಹಾಗೂ ಕಿಶೋರ್ ಪರ ವಾಗಿ ಆತನ ಸ್ನೇಹಿತರಾದ ಗಣೇಶ್ ಮತ್ತು ಭರತ್ ಸಾಕ್ಷಿಗೆ ನಿಂತಿದ್ದರು. ಮದುವೆಯ ಬಳಿಕ ನಾನು ಒಂದೂವರೆ ಲಕ್ಷ ಹಣವನ್ನು ಸೈಟ್ ಖರೀದಿಸಲೆಂದು ನೀಡಿದೆ.
ಫೆ. 23ರಂದು ಆತ ಕತಾರ್ಗೆ ಹೋದ. ನಂತರ ನಾನು ನನ್ನ ಮನೆಯಲ್ಲಿ ತಾಯಿ ಜೊತೆ ಇದ್ದೆ. ನಮ್ಮ ಮದುವೆ ವಿಷಯ ಕಿಶೋರ್ ತಾಯಿಗೆ ತಿಳಿದಾಗ ಆತ ಅದನ್ನು ತಾಯಿ ಬಳಿ ನಿರಾಕರಿ ಸಿದ್ದ. ಆದರೂ ಆತ ತನ್ನೊಂದಿಗೆ ಫೋನ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ. ಕಳೆದ ಎಪ್ರಿಲ್ 19ರಂದು ಆತ ಊರಿಗೆ ಬಂದಿದ್ದು ಆಗಲೂ ನನ್ನ ಜೊತೆ ಸಂಪರ್ಕ ಇಟ್ಟುಕೊಂಡು ಮನೆಗೆ ಬಂದು ಹೋಗುತ್ತಿದ್ದ. ಆದರೂ ಆತನ ತಾಯಿ ನಮ್ಮ ಮದುವೆಯನ್ನು ನಿರಾಕರಿಸಿದ್ದರಿಂದ ನಾನು ಕಂಕನಾಡಿ ಠಾಣೆಗೆ ದೂರು ನೀಡಿ ಆತ್ಮಹತ್ಯೆಗೂ ಯತ್ನಿಸಿದೆ.
ಕಂಕನಾಡಿ ಎಸ್ಐ ಪ್ರಕಾಶ್ ಆತನನ್ನು ಠಾಣೆಗೆ ಕರೆಸಿ ಮದುವೆ ಯಾಗುವುದಾಗಿ ಮುಚ್ಚಳಿಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಆತನ ತಾಯಿ ಸುನಿತಾ ವಿದೇಶದಲ್ಲಿದ್ದು ಮಾರ್ಚ್ನಲ್ಲಿ ತಾನು ಊರಿಗೆ ಬಂದಾಗ ಹಿಂದೂ ಧರ್ಮದ ಪ್ರಕಾರ ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ್ದರು.
ಅವರು ಹೇಳಿದಂತೆ ನಾನು ಮದುವೆಗಾಗಿ ಕಾಲುಂಗರ, ಕರಿಮಣಿ ಸರ, ಮೂಗುಬೊಟ್ಟು ಎಲ್ಲವನ್ನು ಖರೀದಿಸಿದ್ದೆ. ಕಿಶೋರ್ ಕಟೀಲು ದೇವಸ್ಥಾನಕ್ಕೆ ಹೋಗಿ ಮಾರ್ಚ್ 29ಕ್ಕೆ ಮದುವೆಗಾಗಿ ದಿನ ಕೂಡಾ ನಿಗದಿಗೊಳಿಸಿ ಬಂದಿದ್ದರು. ತಾನು ಆಮಂತ್ರಣ ಪತ್ರಿಕೆ ಮುದ್ರಿಸಿ 24ರಂದು ಎಸ್ಐ ಪ್ರಕಾಶ್ಗೆ ನೀಡಿದ್ದೆ. ಕಿಶೋರನೂ ಆಮಂತ್ರಣ ಪತ್ರಿಕೆ ಮುದ್ರಿಸಿದ್ದ.
ಆದರೆ 25ಕ್ಕೆ ಠಾಣೆಗೆ ಹೋದ ಕಿಶೋರ್ ರೇಖಾಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆಗಿದೆ ಎಂದು ಕಂಕನಾಡಿ ಠಾಣಾಧಿಕಾರಿ ಪ್ರಕಾಶ್ಗೆ ಹೇಳಿದಾಗ ಅದನ್ನವರು ನಿರಾಕರಿಸಿದ್ದರು. 28ಕ್ಕೆ ಕಟೀಲಿಗೆ ಹೋದ ಕಿಶೋರ್ನ ತಂಗಿ ವಿದ್ಯಾ ಮತ್ತು ಆಕೆಯ ಗಂಡ, ರೇಖಾಳ ತಂದೆ ತೀರಿ ಹೋಗಿದ್ದು ನಾಳಿನ ಮದುವೆ ರದ್ದು ಮಾಡಿ ಎಂದಿದ್ದರು. ಇದೇ ದಿನ ನಾನು ಕೂಡಾ ಕಟೀಲಿಗೆ ಹೋಗಿದ್ದರಿಂದ ಈ ವಿಷಯ ತಿಳಿಯಿತು. 29ಕ್ಕೆ ಮಧ್ಯಾಹ್ನ 11.25ಕ್ಕೆ ಮುಹೂರ್ತ ನಿಗದಿ ಮಾಡಿದ್ದು ನಾನು ತಾಯಿ ಹಾಗೂ ಕುಟುಂಬಸ್ಥರ ಜೊತೆ ಮದುಮಗಳಾಗಿ ಬೆಳಿಗ್ಗೆ ಒಂಭತ್ತು ಗಂಟೆಗೆ ಹೋಗಿದ್ದೆ. ಆದರೆ ಮಧ್ಯಾಹ್ನ ಒಂದು ಗಂಟೆಯವರೆಗೂ ಕಿಶೋರ್ ಹಾಗೂ ಆತನ ಮನೆಯವರ ಪತ್ತೆ ಇರಲಿಲ್ಲ.
ನಾನು ಮತ್ತೆ ಕಂಕನಾಡಿ ಠಾಣೆಗೆ ಹೋದಾಗ ಅಲ್ಲಿ ಡಿವೈಎಸ್ಪಿ ಗಿರೀಶ್ ಇದ್ದರು. ಅವರಿಗೆ ವಿಷಯ ತಿಳಿಸಿ ಅವರ ಜೊತೆ ಕಿಶೋರ್ನ ಮನೆಗೆ ಹೋದಾಗ ಅಲ್ಲಿ ಗಂಡಸರ್ಯಾರೂ ಇರಲಿಲ್ಲ. ಕಿಶೋರ್ನ ತಾಯಿಯನ್ನು ಠಾಣೆಗೆ ತಂದ ಡಿವೈಎಸ್ಪಿ ಗಿರೀಶ್ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಹೋಂಗೆ ಹಾಕಿದರು. ಬಳಿಕ ಅವರು ಜಾಮೀನಿನಲ್ಲಿ ಹೊರಬಂದಿದ್ದಾರೆ.
ನಾನು ಕಿಶೋರ್, ಆತನ ತಾಯಿ ಸಹಿತ 11 ಮಂದಿ ಮೇಲೆ ದೂರು ನೀಡಿದ್ದೇನೆ. ಆದರೂ ಅವರನ್ನು ಬಂಧಿಸಿಲ್ಲ. ಕಿಶೋರ್ ಇದುವರೆಗೂ ನಾಪತ್ತೆಯಾಗಿದ್ದಾನೆ. ಆತ ಕಳೆದ ತಿಂಗಳು 15ಕ್ಕೆ ಮತ್ತೆ ವಿದೇಶಕ್ಕೆ ಹೋಗಬೇಕಿತ್ತು. ಈ ಬಗ್ಗೆ ಪಾಸ್ಪೋರ್ಟ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಆತ ಹೋಗಿಲ್ಲ ಎಂದರು. ಬಜಪೆ ಎಸ್ಐ ಪ್ರಮೋದ್ ಬಳಿ ವಿಷಯ ಹೇಳಿದಾಗ ಅವರು ಹಳದಿ ಕಾರ್ಡ್ ತರುವಂತೆ ಹೇಳಿದ್ದರು. ಅದಕ್ಕಾಗಿ ಐ.ಜಿ. ಕಚೇರಿಗೆ ಹೋದಾಗ ಅವರ ಭೇಟಿಗೆ ಕಾರ್ಯದರ್ಶಿ ಅವಕಾಶ ನೀಡಲಿಲ್ಲ ಎಂದೂ ರೇಖಾ ಪತ್ರಕರ್ತರೆದುರು ತನ್ನ ಗೋಳಿನ ಕಥೆ ಹೇಳಿದ್ದಾಳೆ.
ತಾನು ಆತನನ್ನು ಮದುವೆಯಾದ ಸಂದರ್ಭದಲ್ಲೇ ಹಿಂದೂ ಆಗಿದ್ದೇನೆ. ಈಗಲೂ ಆತನ ಜೊತೆ ಬದುಕಲು ಸಿದ್ಧನಿದ್ದೇನೆ. ಆದರೆ ನನಗೆ ಎಸ್ಐ ಪ್ರಕಾಶ್ ಮತ್ತು ಡಿವೈಎಸ್ಪಿ ಗಿರೀಶ್ ಹೊರತುಪಡಿಸಿದರೆ ಇತರರ ಕಾನೂನು ನೆರವು ಸಿಗುತ್ತಿಲ್ಲ. ಇದರ ಹಿಂದೆ ರಾಜಕಾರಣಿಗಳ ಒತ್ತಡ ಅಡಗಿದೆ ಎಂದು ದೂರಿದ್ದಾಳೆ.
ಶಕ್ತಿನಗರದಲ್ಲಿ ಬ್ಯೂಟಿಶಿಯನ್ ಆಗಿದ್ದ ರೇಖಾ ತನ್ನ ನೆರೆಯ ಹಿಂದೂ ಯುವಕ ಕಿಶೋರ್ನನ್ನು ತಾಯಿಯ ಒಪ್ಪಿಗೆಯೊಂದಿಗೆ ಮದುವೆಯಾಗಿ ದ್ದರೂ ಆಕೆಯನ್ನು ವಂಚಿಸಿದ ಯುವಕನ ಕುಟುಂಬಸ್ಥರು ಆಕೆಯ ಮೇಲೆಯೇ ಮತಾಂತ ರದ ಆರೋಪ ಹೊರಿಸಿದ್ದರಿಂದ ನೊಂದ ಆಕೆ ಫೆಬ್ರವರಿ 25ರಂದು ಆತ್ಮಹತ್ಯೆಗೂ ಯತ್ನಿಸಿದ್ದಳು. ಈಗ ಬೆಂದೂರ್ವೆಲ್ನಲ್ಲಿರುವ ಸಮಾಜ ಸೇವಾ ಕಾರ್ಯಕರ್ತೆಯೋರ್ವರ ಮನೆಯಲ್ಲಿ ಆಶ್ರಯ ಪಡೆದಿದ್ದು ನಿನ್ನೆ ಪತ್ರಕರ್ತರೊಂದಿಗೆ ತನ್ನ ಹಾಗೂ ಕಿಶೋರ್ನ ವೃತ್ತಾಂತವನ್ನು ತೆರೆದಿಟ್ಟಿದ್ದಾಳೆ.
ಕಿಶೋರ್ನ ಮಾವನ ವಿನಂತಿ ಮೇರೆಗೆ ನಾನು ಫೆ. 13, 2007ರಲ್ಲಿ ಆತನನ್ನು ಮಂಗಳೂರಿನಲ್ಲಿ ರಿಜಿಸ್ಟ್ರಾರ್ ವಿವಾಹ ಆಗಿ ಬಂದರ್ನಲ್ಲಿರುವ ದೇವಿ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ ಪ್ರಕಾರ ಮದುವೆಯಾಗಿದ್ದವು. ಆ ಸಂದರ್ಭದಲ್ಲಿ ಅಲ್ಲಿನ ಅರ್ಚಕ ತಮ್ಮಿಬ್ಬರ ಸಹಿಯನ್ನು ಪಡೆದುಕೊಂಡರು. ಆಗ ನನ್ನ ಪರವಾಗಿ ತಾಯಿ ಆಶಾ ಹಾಗೂ ಕಿಶೋರ್ ಪರ ವಾಗಿ ಆತನ ಸ್ನೇಹಿತರಾದ ಗಣೇಶ್ ಮತ್ತು ಭರತ್ ಸಾಕ್ಷಿಗೆ ನಿಂತಿದ್ದರು. ಮದುವೆಯ ಬಳಿಕ ನಾನು ಒಂದೂವರೆ ಲಕ್ಷ ಹಣವನ್ನು ಸೈಟ್ ಖರೀದಿಸಲೆಂದು ನೀಡಿದೆ.
ಫೆ. 23ರಂದು ಆತ ಕತಾರ್ಗೆ ಹೋದ. ನಂತರ ನಾನು ನನ್ನ ಮನೆಯಲ್ಲಿ ತಾಯಿ ಜೊತೆ ಇದ್ದೆ. ನಮ್ಮ ಮದುವೆ ವಿಷಯ ಕಿಶೋರ್ ತಾಯಿಗೆ ತಿಳಿದಾಗ ಆತ ಅದನ್ನು ತಾಯಿ ಬಳಿ ನಿರಾಕರಿ ಸಿದ್ದ. ಆದರೂ ಆತ ತನ್ನೊಂದಿಗೆ ಫೋನ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ. ಕಳೆದ ಎಪ್ರಿಲ್ 19ರಂದು ಆತ ಊರಿಗೆ ಬಂದಿದ್ದು ಆಗಲೂ ನನ್ನ ಜೊತೆ ಸಂಪರ್ಕ ಇಟ್ಟುಕೊಂಡು ಮನೆಗೆ ಬಂದು ಹೋಗುತ್ತಿದ್ದ. ಆದರೂ ಆತನ ತಾಯಿ ನಮ್ಮ ಮದುವೆಯನ್ನು ನಿರಾಕರಿಸಿದ್ದರಿಂದ ನಾನು ಕಂಕನಾಡಿ ಠಾಣೆಗೆ ದೂರು ನೀಡಿ ಆತ್ಮಹತ್ಯೆಗೂ ಯತ್ನಿಸಿದೆ.
ಕಂಕನಾಡಿ ಎಸ್ಐ ಪ್ರಕಾಶ್ ಆತನನ್ನು ಠಾಣೆಗೆ ಕರೆಸಿ ಮದುವೆ ಯಾಗುವುದಾಗಿ ಮುಚ್ಚಳಿಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಆತನ ತಾಯಿ ಸುನಿತಾ ವಿದೇಶದಲ್ಲಿದ್ದು ಮಾರ್ಚ್ನಲ್ಲಿ ತಾನು ಊರಿಗೆ ಬಂದಾಗ ಹಿಂದೂ ಧರ್ಮದ ಪ್ರಕಾರ ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ್ದರು.
ಅವರು ಹೇಳಿದಂತೆ ನಾನು ಮದುವೆಗಾಗಿ ಕಾಲುಂಗರ, ಕರಿಮಣಿ ಸರ, ಮೂಗುಬೊಟ್ಟು ಎಲ್ಲವನ್ನು ಖರೀದಿಸಿದ್ದೆ. ಕಿಶೋರ್ ಕಟೀಲು ದೇವಸ್ಥಾನಕ್ಕೆ ಹೋಗಿ ಮಾರ್ಚ್ 29ಕ್ಕೆ ಮದುವೆಗಾಗಿ ದಿನ ಕೂಡಾ ನಿಗದಿಗೊಳಿಸಿ ಬಂದಿದ್ದರು. ತಾನು ಆಮಂತ್ರಣ ಪತ್ರಿಕೆ ಮುದ್ರಿಸಿ 24ರಂದು ಎಸ್ಐ ಪ್ರಕಾಶ್ಗೆ ನೀಡಿದ್ದೆ. ಕಿಶೋರನೂ ಆಮಂತ್ರಣ ಪತ್ರಿಕೆ ಮುದ್ರಿಸಿದ್ದ.
ಆದರೆ 25ಕ್ಕೆ ಠಾಣೆಗೆ ಹೋದ ಕಿಶೋರ್ ರೇಖಾಗೆ ಬೇರೆಯವರ ಜೊತೆ ಮದುವೆ ಫಿಕ್ಸ್ ಆಗಿದೆ ಎಂದು ಕಂಕನಾಡಿ ಠಾಣಾಧಿಕಾರಿ ಪ್ರಕಾಶ್ಗೆ ಹೇಳಿದಾಗ ಅದನ್ನವರು ನಿರಾಕರಿಸಿದ್ದರು. 28ಕ್ಕೆ ಕಟೀಲಿಗೆ ಹೋದ ಕಿಶೋರ್ನ ತಂಗಿ ವಿದ್ಯಾ ಮತ್ತು ಆಕೆಯ ಗಂಡ, ರೇಖಾಳ ತಂದೆ ತೀರಿ ಹೋಗಿದ್ದು ನಾಳಿನ ಮದುವೆ ರದ್ದು ಮಾಡಿ ಎಂದಿದ್ದರು. ಇದೇ ದಿನ ನಾನು ಕೂಡಾ ಕಟೀಲಿಗೆ ಹೋಗಿದ್ದರಿಂದ ಈ ವಿಷಯ ತಿಳಿಯಿತು. 29ಕ್ಕೆ ಮಧ್ಯಾಹ್ನ 11.25ಕ್ಕೆ ಮುಹೂರ್ತ ನಿಗದಿ ಮಾಡಿದ್ದು ನಾನು ತಾಯಿ ಹಾಗೂ ಕುಟುಂಬಸ್ಥರ ಜೊತೆ ಮದುಮಗಳಾಗಿ ಬೆಳಿಗ್ಗೆ ಒಂಭತ್ತು ಗಂಟೆಗೆ ಹೋಗಿದ್ದೆ. ಆದರೆ ಮಧ್ಯಾಹ್ನ ಒಂದು ಗಂಟೆಯವರೆಗೂ ಕಿಶೋರ್ ಹಾಗೂ ಆತನ ಮನೆಯವರ ಪತ್ತೆ ಇರಲಿಲ್ಲ.
ನಾನು ಮತ್ತೆ ಕಂಕನಾಡಿ ಠಾಣೆಗೆ ಹೋದಾಗ ಅಲ್ಲಿ ಡಿವೈಎಸ್ಪಿ ಗಿರೀಶ್ ಇದ್ದರು. ಅವರಿಗೆ ವಿಷಯ ತಿಳಿಸಿ ಅವರ ಜೊತೆ ಕಿಶೋರ್ನ ಮನೆಗೆ ಹೋದಾಗ ಅಲ್ಲಿ ಗಂಡಸರ್ಯಾರೂ ಇರಲಿಲ್ಲ. ಕಿಶೋರ್ನ ತಾಯಿಯನ್ನು ಠಾಣೆಗೆ ತಂದ ಡಿವೈಎಸ್ಪಿ ಗಿರೀಶ್ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಹೋಂಗೆ ಹಾಕಿದರು. ಬಳಿಕ ಅವರು ಜಾಮೀನಿನಲ್ಲಿ ಹೊರಬಂದಿದ್ದಾರೆ.
ನಾನು ಕಿಶೋರ್, ಆತನ ತಾಯಿ ಸಹಿತ 11 ಮಂದಿ ಮೇಲೆ ದೂರು ನೀಡಿದ್ದೇನೆ. ಆದರೂ ಅವರನ್ನು ಬಂಧಿಸಿಲ್ಲ. ಕಿಶೋರ್ ಇದುವರೆಗೂ ನಾಪತ್ತೆಯಾಗಿದ್ದಾನೆ. ಆತ ಕಳೆದ ತಿಂಗಳು 15ಕ್ಕೆ ಮತ್ತೆ ವಿದೇಶಕ್ಕೆ ಹೋಗಬೇಕಿತ್ತು. ಈ ಬಗ್ಗೆ ಪಾಸ್ಪೋರ್ಟ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಆತ ಹೋಗಿಲ್ಲ ಎಂದರು. ಬಜಪೆ ಎಸ್ಐ ಪ್ರಮೋದ್ ಬಳಿ ವಿಷಯ ಹೇಳಿದಾಗ ಅವರು ಹಳದಿ ಕಾರ್ಡ್ ತರುವಂತೆ ಹೇಳಿದ್ದರು. ಅದಕ್ಕಾಗಿ ಐ.ಜಿ. ಕಚೇರಿಗೆ ಹೋದಾಗ ಅವರ ಭೇಟಿಗೆ ಕಾರ್ಯದರ್ಶಿ ಅವಕಾಶ ನೀಡಲಿಲ್ಲ ಎಂದೂ ರೇಖಾ ಪತ್ರಕರ್ತರೆದುರು ತನ್ನ ಗೋಳಿನ ಕಥೆ ಹೇಳಿದ್ದಾಳೆ.
ತಾನು ಆತನನ್ನು ಮದುವೆಯಾದ ಸಂದರ್ಭದಲ್ಲೇ ಹಿಂದೂ ಆಗಿದ್ದೇನೆ. ಈಗಲೂ ಆತನ ಜೊತೆ ಬದುಕಲು ಸಿದ್ಧನಿದ್ದೇನೆ. ಆದರೆ ನನಗೆ ಎಸ್ಐ ಪ್ರಕಾಶ್ ಮತ್ತು ಡಿವೈಎಸ್ಪಿ ಗಿರೀಶ್ ಹೊರತುಪಡಿಸಿದರೆ ಇತರರ ಕಾನೂನು ನೆರವು ಸಿಗುತ್ತಿಲ್ಲ. ಇದರ ಹಿಂದೆ ರಾಜಕಾರಣಿಗಳ ಒತ್ತಡ ಅಡಗಿದೆ ಎಂದು ದೂರಿದ್ದಾಳೆ.
No comments:
Post a Comment